Saturday, May 17, 2008

ಪುಸ್ತಕ ಪ್ರೀತಿ ಕನ್ನಡ ಬ್ಲಾಗ್ ಆರಂಭ

ಇಂದು ಕನ್ನಡ ಸಾಹಿತ್ಯ ಪುಸ್ತಕಗಳನ್ನು ಕುರಿತ "ಪುಸ್ತಕ ಪ್ರೀತಿ" ಎಂಬ ಕನ್ನಡ ಬ್ಲಾಗ್ನ್ನು ಆರಂಭಿಸಲಾಯಿತು. ಸ್ಥಳ: ಜಯನಗರ, 4 ನೇ ಬ್ಲಾಕ್, ಬೆಂಗಳೂರುದಿ: 17.05.2008.

Monday, June 11, 2007

ಮತ್ತೊಮ್ಮೆ ಹುಟ್ಟಿ ಬಾ, ವೀರ ಭಗತ್ ಸಿಂಗ್

ಕೆಚ್ಚೆದೆಯ ಭಗತ್
"ಕೇವಲ ರಕ್ತಪಾತವಷ್ಟೆ ಕ್ರಾಂತಿಯಲ್ಲ. ಕ್ರಾಂತಿಯೆಂದರೆ ಬರೆ ಬಾಂಬು, ಪಿಸ್ತೂಲುಗಳ ಹೋರಾಟವಲ್ಲ. ಸ್ವಾತಂತ್ರ್ಯ ಎನ್ನುವುದೇ ಕ್ರಾಂತಿ. ಶೋಷಿತ ವ್ಯವಸ್ಥೆಯನ್ನು ಕಿತ್ತೊಗೆದು ಶ್ರಮಿಕರು ವಿಮೋಚನೆ ಪಡೆಯುವುದೇ ಕ್ರಾಂತಿ. ಅಪ್ಪಟ ಕ್ರಾಂತಿಯು ಎಂದಿಗೂ ಒಡೆಯರ, ಪ್ರಭುಗಳ, ಶೋಷಕರ ವಿರೋಧಿ." .....
"ಈಗ ಭಾರತಕ್ಕೆ ಬೇಕಾಗಿರುವ ಏಕೈಕ ಪಾಠವೆಂದರೆ, ಸಾಯುವುದು ಹೇಗೆ ಎಂಬುದನ್ನು ಕಲಿಸುವುದು. ಇದನ್ನು ಕಲಿಸಲು ಇರುವ ಒಂದೇ ಮಾರ್ಗವೆಂದರೆ ನಾವೇ ಸತ್ತು ತೋರಿಸುವುದು. ಹೀಗಾಗಿಯೇ ನಾನು ಸಾಯುತ್ತೇನೆ". ಭಗತ್
ಪ್ರಪಂಚದ ಯಾವುದೇ ರಾಷ್ಟ್ರದ ಇತಹಾಸದ ಪುಟಗಳನ್ನು ತಿರುವಿಹಾಕಿದರೂ ಸಹ ಭಗತ್ಸಿಂಗ್ ರಷ್ಟು ಚಿಕ್ಕ ವಯಸ್ಸಿನಲ್ಲೇ ಮಾನವ ಇತಿಹಾಸದಲ್ಲಿ ಅಚ್ಚಳಿಯದ ಛಾಪೊತ್ತಿರುವ ಅಪ್ರತಿಮ ಸಾಹಸಿಗರು ಕಾಣಸಿಗುವುದಿಲ್ಲ. ಧುಮ್ಮಿಕ್ಕುವ ಜಲಪಾತದಂತಹ ಹುಮ್ಮಸ್ಸು, ಎದೆ ಝಲ್ಲೆನ್ನಿಸುವ ಧೈರ್ಯ, ಎಂಥಹವರನ್ನೂ ವಿದ್ಯುತ್-ಸಂಚಲನಕ್ಕೀಡು ಮಾಡುವಂಥಹ ವ್ಯಕ್ತಿತ್ವ ಮತ್ತು ಬದುಕಿದ್ದಷ್ಟು ದಿನವೂ ಹುಲಿಯಂತೆ ಮುನ್ನುಗ್ಗುತ್ತಿದ್ದ ಭಗತ್, ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ತಮ್ಮದೇ ಆದ ವಿಶೇಷ ಸ್ಥಾನವನ್ನು ಸೃಷ್ಟಿಸಿದ್ದಾರೆ. ಯುವ ಜನರ ಸ್ಪೂತರ್ಿ ಮತ್ತು ಕೆಚ್ಚೆದೆಯ ಪ್ರತೀಕದಂತಿದ್ದ ಅವರ ಜನಪ್ರಿಯತೆಯು ಕೋಟ್ಯಾಂತರ ಯುವಜನರ ಎಚ್ಚರಿಕೆ ಘಂಟೆಯ ಪ್ರತಿಧ್ವನಿಗಳಾಗಿ ಮಾರ್ಪಟ್ಟು ಬ್ರಿಟೀಷರ ಪಾಲಿಗೆ ಆಗಂತುಕನಂತೆ ಅಪ್ಪಳಿಸಿತೆಂದರೆ ಉತ್ಟ್ರೇಕ್ಷೆಯೆಂದೇನೂ ಅನಿಸದು. ಅವರು ಭಾರತೀಯ ಯುವಜನತೆಯ ವೀರೋಚಿತ ಹೋರಾಟಗಳು ಮತ್ತು ಸಾಹಸ ಶೌರ್ಯಗಳ ಮತ್ತೊಂದು ಮುಖವೆತ್ತಂತಿದ್ದರು.
ಅಂಥಹ ಕ್ಷಿತಿಜತಾರೆ ಉದಯಿಸಿದ್ದು 1907ರ ಸೆಪ್ಟೆಂಬರ್ 27 ರಂದು ಈಗ ಪಾಕಿಸ್ತಾನಕ್ಕೆ ಸೇರಿರುವ ಲಾಯಲ್ಪುರ ಜಿಲ್ಲೆಯ ಜರಾನ್ವಾಲಾ ತಾಲ್ಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ. ಅವರ ತಾಯಿ ಶ್ರೀಮತಿ ವಿದ್ಯಾವತಿ ಮತ್ತು ಜೀವ ವಿಮಾ ಕಂಪನಿಯಲ್ಲಿ ಎಜೆಂಟರಾಗಿ ವೃತ್ತಿ ಮಾಡುತ್ತಿದ್ದ ತಂದೆ ಕಿಶನ್ಸಿಂಗ್ರು. ಭಗತ್ರ ಮೇಲೆ ಅತೀವ ಪ್ರಭಾವವನ್ನು ಬೀರಿದ್ದವರೆಂದರೆ ಅವರ ಚಿಕ್ಕಪ್ಪ ಅಜಿತ್ಸಿಂಗ್. ಈಗಾಗಲೇ ಅಜಿತ್ ಸಿಂಗರು ಉಗ್ರ ಭಾಷಣಕಾರರಾಗಿದ್ದು ರೈತರ ನಡುವೆ ಹಲವಾರು ಚಳುವಳಿಗಳನ್ನು ಸಂಘಟಿಸಿ ಬ್ರಿಟೀಷರು ಬಂಧನಕ್ಕೀಡು ಮಾಡಲು ಬಲೆ ನೇಯ್ದಿದ್ದರೂ ಸಿಗದೆ ಅವರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು. ಇದರೊಂದಿಗೆ ಜಲಿಯನ್ ವಾಲಾಬಾಗ್ನಲ್ಲಿ ಬ್ರಿಟೀಷರು ನಡೆಸಿದ ಮಾರಣಹೋಮದಿಂದುಂಟಾದ ರಕ್ತದ ಕೆಂಪು ಕಲೆ ಅವರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಬ್ಬಿಸಿ ಮನಸ್ಸಿನಲ್ಲಿ ಹೋರಾಟದ ಚಿತ್ತಾರ ಮೂಡಿಸಿತ್ತು. ಪಂಜಾಬಿನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಲಾಹೋರ್ ಪಿತೂರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕತರ್ಾರ ಸಿಂಗ್ ಸರಭ್ ರವರನ್ನು 1915 ರಲ್ಲಿ ಅವರ 20 ನೇ ವಯಸ್ಸಿನಲ್ಲೇ ನೇಣಿಗೇರಿಸಲಾಗಿತ್ತು. "ರಾಷ್ಟ್ರ ವಿಮೋಚನೆಯೊಂದೇ ನನ್ನ ಗುರಿ. ಯಾವುದೇ ವ್ಯಕ್ತಿ, ರಾಷ್ಟ್ರ, ಧರ್ಮ ಅಥವಾ ಜನಾಂಗದ ಮೇಲೆ ದ್ವೇಷ ಸಾಧಿಸಲು ನಾನಾವುದನ್ನೂ ಮಾಡಿಲ್ಲ. ನನಗೆ ಬೇಕಾಗಿರುವುದೊಂದೆ - ಸ್ವಾತಂತ್ರ್ಯ. ಅದೊಂದೇ ನನ್ನ ಕನಸು" ಎಂ ಸರಭ್ರ ಕೊನೆಗಾಲದ ಮಾತುಗಳು ಅವರಲ್ಲಿ ಕ್ರಾಂತಿಯ ಉದ್ದೀಪನ ಹಚ್ಚಿದ್ದವು. ಇದು ಭಗತ್ರನ್ನು ಮೈನವಿರೇಳಿಸಿ ಸಾವಿಗೇ ಸವಾಲು ಹಾಕುವ ಗುಣವನ್ನು ಮೈಗೂಡುವಂತೆ ಮಾಡಿತ್ತು.
ವಿದ್ಯಾಥರ್ಿ ಜೀವನದಲ್ಲಿ ಅವರು 1921 ರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಭಾವನೆಗಳನ್ನು ಪ್ರಚೋದಿಸುತ್ತಿದ್ದರಿಂದ ಬ್ರಿಟೀಷರು ನಿಷೇಧಿಸಿದ್ದ ರಾಷ್ಟ್ರೀಯ ನಾಟಕ ಕೂಟದ ಸಕ್ರಿಯ ಕಾರ್ಯಕರ್ತನಾಗಿದ್ದುಕೊಂಡೇ ತಾನೂ ಸಹ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಮನೆಯಲ್ಲಿ ಮದುವೆ ಒತ್ತಾಯ ಹೆಚ್ಚಾದಾಗ ಮನೆ ಬಿಟ್ಟು ವಿಧ್ಯಾಭ್ಯಾಸ ತೊರೆದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲು 1924 ರಲ್ಲಿ ಕಾನ್ಪುರಕ್ಕೆ ತೆರೆಳಿದರು. ಕಾನ್ಪುರದಲ್ಲಿ ಚಂದ್ರಶೇಖರ್ ಆಜಾದ್, ಬಿ.ಕೆ. ದತ್, ಜೆ.ಸಿ.ಚಟಜರ್ಿ, ಬಿಜೊಯ್ ಕುಮಾರ್ ಸಿನ್ಹಾ ರಂಥಹ ಕಾರ್ಯಕಾರಿಗಳ ಸಂಪರ್ಕ ಪಡೆದರು. ಈ ಸಮ್ಮಿಲನ ಗಾಳಿ ಮತ್ತು ಬೆಂಕಿ ಒಂದೂಗೂಡಿದಂತಾಗಿ ಸಮರ ಶೀಲ ಹೋರಾಟ ನಡೆಸಲು ಭದ್ರವಾದ ಬುನಾದಿ ಹಾಕಿದವು. ಆ ಸಂದರ್ಭದಲ್ಲಿ ಕ್ರಾಂತಿಕಾರಿ ಸಂಘಟನೆಯೆಂಬ ಹೆಗ್ಗಳಿಕೆಯಿಂದ ಕೆಲಸ ಮಾಡುತ್ತಿದ್ದ ಹಿಂದೂಸ್ತಾನ್ ಗಣತಂತ್ರವಾದಿ ಸಂಘಟನೆಯ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದರು. ವಸಾಹತುಶಾಹಿ ಪ್ರಭುತ್ವವನ್ನು ಶಸ್ತ್ರಸಜ್ಜಿತ ಕ್ರಾಂತಿಯ ಮೂಲಕ ಕಿತ್ತೊಗೆಯಲು ಸಚಿಂದ್ರ ನಾಥ ಸನ್ಯಾಲ್, ಜೋಗೇಶ್ ಚಂದ್ರ ಚಟಜರ್ಿ ಮತ್ತು ರಾಮಪ್ರಸಾದ್ ಬಿಸ್ಮಿಲ್ರವರ ನಾಯಕತ್ವದಡಿ 1924 ರ ಅಕ್ಟೋಬರ್ನಲ್ಲಿ ಹಿಂದೂಸ್ತಾನ್ ಗಣತಂತ್ರ ಸಂಘಟನೆಯನ್ನು ಸ್ಥಾಪಿಸಲಾಗಿತ್ತು. ಕ್ರಾಂತಿಕಾರಿ ಸಮರಶೀಲ ಚಳುವಳಿಯ ಹಳೆಯ ಸಂಪ್ರದಾಯಗಳನ್ನು ಮುಂದುವರಿಸುತ್ತಾ ಸಮೂಹ ಸಶಸ್ತ್ರ ಹೋರಾಟದ ಮೂಲಕ ಹೊಸ ಸಮಾಜವಾದಿ ದೃಷ್ಟಿಕೋನವನ್ನು ಬೆಸೆಯುತ್ತಿದ್ದ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಶಿವ ವಮರ್ಾ ಮತ್ತು ಸುಖ್ದೇವ್ ರವರು ಹಿಂದೂಸ್ತಾನ್ ಗಣತಂತ್ರ ಸಂಘಟನೆಯ ಸದಸ್ಯರಾಗಿ ನಂತರ ಸೇರಿದರು.
ಕಾಕೋರಿ ದರೋಡೆ ಪ್ರಕರಣ:ಹದರ್ೋಯಿಯಿಂದ ಲಕ್ನೋಗೆ ಹೊರಟ್ಟಿದ್ದ ರೈಲನ್ನು ಕಾಕೋರಿ ಎಂಬ ನಿಲ್ದಾಣದಲ್ಲಿ 1925ರ ಆಗಸ್ಟ್ 9 ರಂದು ಬಳಿ ತಡೆದು ಬ್ರಿಟೀಷ್ ಖಜಾನೆಗೆ ಪಾವತಿಗಾಗಿ ಹೊಯ್ಯುತ್ತಿದ್ದ ಸುಮಾರು ರೂ. 4,000 ಗಳ ಪೆಟ್ಟಿಗೆಯನ್ನು ಅಪಹರಿಸಿ ಹಿಂದೂಸ್ತಾನ್ ಗಣತಂತ್ರವಾದಿ ಸಂಘಟನೆಯು ಬ್ರಿಟೀಷ್ ಪ್ರಭುತ್ವಕ್ಕೆ ನೇರ ಸವಾಲೆಸೆಯಿತು. ಈ ಪ್ರಕರಣದಲ್ಲಿ ಬಂಧಿಸಲಾಗಿದ್ದ ಕೆಲವರನ್ನು ಕಾರಾಗೃಹದಿಂದ ಬಿಡಿಸಿಕೊಂಡು ಬರಲು ಭಗತ್ ಕಾನ್ಪುರದಲ್ಲಿ ಯೋಜನೆ ರೂಪಿಸಿದರೂ, ಬ್ರಿಟೀಷರಿಗೆ ಅದರ ತಿಳಿವುಂಟಾದ್ದರಿಂದ ಯೋಜನೆಯನ್ನು ಕೈಬಿಡಬೇಕಾಯಿತು. "ಕಾಕೋರಿ ಪ್ರಕರಣ" ವೆಂದೇ ಖ್ಯಾತಿ ಪಡೆದ ಅಪಹರಣದಲ್ಲಿ ಭಾಗಿಯಾಗಿದ್ದವರಲ್ಲಿ ಚಂದ್ರಶೇಖರ್ ಆಜಾದ್ & ಇನ್ನೊಬ್ಬರನ್ನು ಹೊರತು ಪಡಿಸಿ ಉಳಿದೆಲ್ಲರನ್ನೂ ಉಗ್ರಶಿಕ್ಷೆಗೊಳಪಡಿಸಿ ಹಲವರನ್ನು ನಿರ್ದಯವಾಗಿ ಗಲ್ಲಿಗೇರಿಸಲಾಯಿತು. ಕಾಕೋರಿ ಪ್ರಕರಣದಲ್ಲಿ ಹಿಂದೂಸ್ತಾನ್ ಗಣತಂತ್ರ ಸಂಘಟನೆಯ ಹಲವು ಕಾರ್ಯಕರ್ತರನ್ನು ಬ್ರಿಟೀಷರು ಬಂಧಿಸಿ ಕಿರುಕುಳ ನೀಡುತ್ತಾ ಅತೀವ ಆಸ್ಥೆವಹಿಸಿದ್ದರಿಂದಾಗಿ ಸಂಘಟನೆಯು ನೆಲಕಚ್ಚುವಂತಾಯಿತು.
ಸದಾ ಉತ್ಸಾಹದ ಚಿಲುಮೆಯಂತೆ ಕ್ರಾಂತಿಕಾರಿ ಹಾದಿಯನ್ನು ಅರಸುತ್ತಿದ್ದ ಭಗತ್ ಮತ್ತೆ ಲಾಹೋರ್ಗೆ ಮರಳಿ ಹಲವು ಯುವಜನರು & ವಿದ್ಯಾಥರ್ಿಗಳನ್ನು ಸಂಘಟಿಸಲು 1926 ಮಾಚರ್್ನಲ್ಲಿ "ನೌ ಜವಾನ್ ಭಾರತ್ ಸಭಾ" ಎಂಬ ಸಂಘಟನೆಯನ್ನು ರಚಿಸಿ ಕಾರ್ಯದಶರ್ಿಯಾಗಿ ಆಯ್ಕೆಯಾದರು. ಹಿಂದಿ ಲೇಖಕ ಯಶಪಾಲ್ರವರ ಮಾತುಗಳು ಯಾವಾಗಲೂ ಇವರ ಕಿವಿಯಲ್ಲಿ ಗುಯ್ಗುಡುತ್ತಿದ್ದವು: ತಮ್ಮ ಕುಟುಂಬಳಿಗೆ ಅಂಟಿಕೊಂಡು ತೀರ ಖಾಸಗಿ ಬದುಕನ್ನು ನಡೆಸುವವರು ಸಹಜ ಪ್ರವೃತ್ತಿಗಳಿಗೆ ದಾಸರಾಗಿರುತ್ತಾರೆ; ಅವರು ನಿಜವಾಗಿಯೂ ಭಾವನಾತ್ಮಕ ಸಂಬಂಧಗಳ ಕಟ್ಟಳೆಯಲ್ಲಿ ಸಿಲುಕಿಕೊಂಡು ಪ್ರಗತಿಯ ಚಿಲುಮೆಯನ್ನೇ ಕಾಣದೆ ಕೊಳೆಯುತ್ತಾರೆ. ಇಡಿಯ ಸಮಾಜ ಮತ್ತು ಸಮಷ್ಟಿಯನ್ನು ಒಂದಾಗಿ ನೋಡಿದಾಗ ಮಾತ್ರ ತಮ್ಮ ಭಾವನಾತ್ಮಕ ಚೌಕಟ್ಟಿನಿಂದ ಹೊರಬಂದು ಗುರಿ ಸಾಧಿಸಲು ಸಾಧ್ಯವಾಗುತ್ತದೆ. ಹಾಗಾದಲ್ಲಿ ಮಾತ್ರ ಅತ್ಯುತ್ತಮ ಚಿಂತನೆಯಲ್ಲಿ ಮೊಳಕೆಯೊಡೆಯುವ ಕ್ರಾಂತಿಗಳು ಜನಸಾಮಾನ್ಯರಲ್ಲಿ ಬೇರೂರುತ್ತವೆ. ಕಾನ್ಪುರ ಬಿಡುವ ವೇಳೆಗ ಅವರು ಮಾಕ್ಸರ್್ರವರ ಮಹೋನ್ನತ ಕೃತಿ 'ಬಂಡವಾಳ' ಓದಿ ಮುಗಿಸಿ ಬೇರೆಯದೆ ವ್ಯಕ್ತಿಯಾಗಿ ರೂಪಗೊಂಡಿದ್ದರು. ಕಾಮರ್ಿಕರು, ರೈತರು ಮತ್ತು ವಿದ್ಯಾಥರ್ಿಗಳ ನಡುವೆ ಧರ್ಮ ನಿರಪೇಕ್ಷತೆಯ ತಾತ್ವಿಕ ನೆಲೆಗಟ್ಟಿನ ಮೇಲೆ ಈ ಸಂಘಟನೆಯು ಕೆಲಸ ಮಾಡುತ್ತಿತ್ತು. ಸಭಾದ ಕ್ರಾಂತಿಕಾರಿ ಹೋರಾಟದ ಸ್ವರೂಪಗಳನ್ನು ಆರಂಭದಲ್ಲಿಯೇ ಗುರುತಿಸಿದ ಬ್ರಿಟೀಷರು ಈ ಸಂಘಟನೆಯು ಕಾಲೇಜುಗಳನ್ನು ಪ್ರವೇಶಿಸದಂತೆ ನಿರ್ಬಂಧಿಸಿ ಬೇಹುಗಾರರ ಕಾಟದಿಂದ ನೆಲೆ ಬದಲಿಸುವಂತಾಗಿಸಿ ಕೊನೆಗೆ 1930 ರಲ್ಲಿ ಬ್ರಿಟೀಷ್ ಸಕರ್ಾರವು ಸಭಾವನ್ನು ಒಂದು ಕಾನೂನು ಬಾಹಿರ ಸಂಸ್ಥೆಯೆಂದು ಘೋಷಿಸಿತು.
ಹೆಚ್.ಎಸ್.ಆರ್.ಎ ಉದಯ ಮತ್ತು ಪೊಲೀಸ್ ಅಧಿಕಾರಿ ಸ್ಕಾಟ್ ಕೊಲೆ: ಸ್ವಾತಂತ್ರ್ಯ & ಸಮಾಜವಾದ ಎರಡನ್ನೂ ಬೆಸೆದು ಹೋರಾಟ ನಡೆಸಲು ಸಶಸ್ತ್ರ ಪಡೆಯ ಅವಶ್ಯಕತೆ ಮತ್ತು ಚಳುವಳಿಗಳಿಗೆ ಸಾಮಾಜಿಕ ದಿಕ್ಸೂಚಿಯಾಗಲು ಸಶಕ್ತವಾದ ಪ್ರತ್ಯೇಕ ಸಂಘಟನೆಯ ಅತ್ಯಗತ್ಯತೆಯನ್ನು ಅರ್ಥಮಾಡಿಕೊಂಡು "ಹಿಂದೂಸ್ತಾನ್ ಸಮಾಜವಾದಿ ಗಣತಂತ್ರ ಸೈನ್ಯ" (ಹೆಚ್.ಎಸ್.ಆರ್.ಎ) ವೆಂಬ ಸಂಘಟನೆಯನ್ನು ರಚಿಸಿ ಚಂದ್ರಶೇಖರ್ ಆಜಾದ್ರವರನ್ನು ಸೇನೆಯ ದಂಡನಾಯಕರನ್ನಾಗಿಯೂ, ಭಗತ್ ಸಿಂಗ್ರನ್ನು ಅಖಿಲ ಭಾರತ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿಯೂ ಆಯ್ಕೆ ಮಾಡಲಾಯಿತು. ಹಿಂದೂಸ್ತಾನ್ ಗಣತಂತ್ರ ಸಂಘಟನೆಯ ಯುವ ಸದಸ್ಯರೆಲ್ಲ ಒಗ್ಗೂಡಿ ಚಂದ್ರಶೇಖರ್ ಆಜಾದ್ ರ ನಾಯಕತ್ವದಲ್ಲಿ 1928 ರ ಸೆಪ್ಟೆಂಬರ್ನಲ್ಲಿ ಹೆಚ್.ಎಸ್.ಆರ್.ಎ ಯನ್ನು ಸ್ಥಾಪಿಸಿದರು. ಅತ್ಯಂತ ಬುದ್ದಿವಂತ ಮತ್ತು ಅರ್ಪಣಾ ಮನೋಭಾವದ ಯುವಜನರು ಅದರಲ್ಲಿದ್ದರೂ, ಉತ್ತಮ ಸೈದ್ದಾಂತಿಕ ತಿಳುವಳಿಕೆ ಮತ್ತು ಅಗಾಧ ಸಾಮಥ್ರ್ಯ ಹೊಂದಿದ್ದ ಭಗತ್ಸಿಂಗ್ ಸಂಘಟನೆಯ ಶಕ್ತಿಯಾಗಿದ್ದರೆ, ಅತ್ಯುತ್ತಮ ಸಂಘಟನಾ ಚಾತುರ್ಯ ಹೊಂದಿದ್ದ ಸುಖ್ದೇವ್ ಅದರ ಅಡಿಪಾಯವಾಗಿದ್ದರು. ಭಗತ್ಸಿಂಗ್ ಮತ್ತು ಸುಖ್ದೇವ್ರವರು ಸ್ಥಾಪಿಸಿದ್ದ ಲಾಹೋರ್ ವಿದ್ಯಾಥರ್ಿ ಸಂಘಟನೆಯು ಹೆಚ್.ಎಸ್.ಆರ್.ಎ ಗೆ ಕಾರ್ಯಕರ್ತರನ್ನು ನೇಮಕಾತಿ ಮಾಡಿಕೊಳ್ಳುವ ತಾಣವಾಗಿತ್ತು. ರಷ್ಯಾದ ಮಹಾನ್ ಕ್ರಾಂತಿಯಿಂದ ಪ್ರೇರೇಪಿತಗೊಂಡು ಸ್ಥಾಪಿತವಾಗಿದ್ದ ಈ ಸಂಘಟನೆಯ ಮೂಲಧ್ಯೇಯ ಸಂಘಟಿತ ಸಶಸ್ತ್ರ ಕ್ರಾಂತಿಯ ಮೂಲಕ ಸಂಯುಕ್ತ ರಾಜ್ಯಗಳ ಗಣರಾಜ್ಯವನ್ನು ಸ್ಥಾಪಿಸುವುದಾಗಿತ್ತು.
ಭಗತ್ಸಿಂಗ್ ಮತ್ತು ಸಂಗಡಿಗರು ಸವೆಸುತ್ತಿದ್ದ ಜೀವನ ಬಹಳ ಕಠೋರತೆಯಿಂದ ಕೂಡಿತ್ತು. ಎಲ್ಲರಿಗೂ ಮಲಗಲು ಸ್ಥಳವಿಲ್ಲ, ಅಡಿಗೆ ಮಾಡಲು ಅಡಿಗೆ ಸಾಮಾನುಗಳಿಲ್ಲ, ದಿನಸಿ ಕೊಳ್ಳಲು ಹಣವಂತೂ ಮೊದಲೇ ಇರಲಿಲ್ಲ. ಕೆಲವು ದಿನ ರಾತ್ರಿ ಊಟ ಸಿಗದಿದ್ದರೆ, ಕೆಲವು ದಿನ ಮಧ್ಯಾಹ್ನದ ಊಟ ಸಿಗುತ್ತಿರಲಿಲ್ಲ, ಮತ್ತೆ ಕೆಲವು ದಿನಪೂರ್ತ ಊಟವೇ ಇಲ್ಲದೆ ಹಸಿವೆಯಿಂದ ನೀರು ಕುಡಿದು ಮಲಗಬೇಕಾಗಿತ್ತು. ಹಣಕಾಸಿನ ಇಲಾಖೆಯನ್ನು ಆಜಾದ್ ನೋಡಿಕೊಳ್ಳುತ್ತಿದ್ದು ಪ್ರಮುಖ ವ್ಯಕ್ತಿಗಳ ಸಂಪರ್ಕದಿಂದ ಹಣ ಹುಡುಕುವ ಕಾಯಕ ಅವರದಾಗಿತ್ತು. ಕೆಲವು ಸಂದೇಶವಾಹಕರ ಮೂಲಕ ಹಣ ರವಾನೆಯಾಗುತ್ತಿದ್ದರೂ ಕೂಡ ಬದುಕುಳಿಯಲಷ್ಟೆ ಅದು ಸಾಕಾಗುತ್ತಿತ್ತು.
ಅಂದಿನ ಭಾರತದಲ್ಲಿ ಬಿಗಡಾಯಿಸುತ್ತಿದ್ದ ರಾಜಕೀಯ ವಿದ್ಯಮಾನಗಳ ಕುರಿತು ವರದಿ ತಯಾರಿಸಲು ಸೈಮನ್ ಅಧ್ಯಕ್ಷತೆಯ ಆಂಗ್ಲರ ಆಯೋಗವೊಂದು 1928ರ ಅಕ್ಟೋಬರ್ 30 ರಂದು ಲಾಹೋರ್ ತಲುಪುವುದಿತ್ತು. ಬ್ರಿಟೀಷರ ವಿರುದ್ದ ಸದಾ ಕತ್ತಿ ಮಸೆಯುತ್ತಾ, ಜ್ವಾಲಾಮುಖಿಯಂತೆ ಸ್ಪೋಟಿಸಲು ಇದಿರು ನೋಡುತ್ತಿದ್ದ ಭಗತ್ಸಿಂಗ್ ತನ್ನ ಸಂಪರ್ಕದಲ್ಲಿರುವ ಎಲ್ಲ ಸಂಘಟನೆಗಳೊಡನೆ ಚಚರ್ಿಸಿ ಸೈಮನ್ ಆಯೋಗವನ್ನು ಬಹಿಷ್ಕರಿಸಲು ಸಿದ್ದತೆ ನಡೆಸುತ್ತಿದ್ದರು. ಅದರ ಹಿಂದಿನ ದಿನ ಪೊಲೀಸ್ ಮುಖ್ಯಾಧಿಕಾರಿ ಸ್ಕಾಟ್ ಆದೇಶವೊಂದನ್ನು ಹೊರಡಿಸಿ ಆಯೋಗದ ವಿರುದ್ದ ಯಾವುದೇ ಮೆರವಣಿಗೆಯನ್ನು ನಿಷೇಧವೆಂದು ಘೋಷಿಸಿದ. ನಿಷೇದಾಜ್ಞೆಯನ್ನು ಧಿಕ್ಕರಿಸಿ ಲಾಲ ಲಜಪತ್ರಾಯ್ ರವರ ಮುಂದಾಳತ್ವದಲ್ಲಿ ಸಾಗುತ್ತಾ ಹೊರಟ ಶಾಂತಿಯುತವಾದ ಮೆರವಣಿಗೆಯತ್ತ ಪೋಲೀಸರ ಲಾಠಿ ಪ್ರಹಾರ ನಡೆಸಿದರು. ಕ್ರೋಧಾಗ್ನಿಯಿಂದ ಕುದಿಯುತ್ತಿದ್ದ ಪೊಲೀಸ್ ಮುಖ್ಯಾಧಿಕಾರಿ ಸ್ಕಾಟ್ ತಾನೇ ಮುಂದಾಗಿ ಲಜಪತ್ರಾಯರ ತಲೆಗೆ ಅಪ್ಪಳಿಸಿ ಕ್ರೂರವಾಗಿ ಪ್ರಹಾರ ನಡೆಸಿದ್ದರಿಂದ ಅವರು ಮರಣ ಹೊಂದಿದರು.
ಇದೊಂದು ಸ್ವಾಭಿಮಾನಿ ಭಾರತದ ಸಾರ್ವಭೌಮತೆಯ ಮೇಲೆ ಬ್ರಿಟೀಷರು ಪ್ರಯೋಗಿಸಿದ ಬಲಪ್ರಹಾರವೆಂದು ಹೆಚ್.ಎಸ್.ಆರ್.ಎ ಪರಿಗಣಿಸಿತು. ಪೋಲೀಸ್ ಅಧಿಕಾರಿ ಸ್ಕಾಟ್ನ ಕ್ರೌರ್ಯಕ್ಕೆ ಸಮಾಧಿ ಕಟ್ಟುವ ಮೂಲಕ ಬ್ರಿಟೀಷ್ ಸಾಮ್ರಾಜ್ಯಶಾಹಿ ಪ್ರಭುತ್ವಕ್ಕೆ ಸವಾಲೆಸೆಯಲು ಹಿಂದುಸ್ತಾನ್ ಸಮಾಜವಾದಿ ಗಣತಂತ್ರ ಸಂಘಟನೆಯು ಯೋಜನೆ ಸಿದ್ದಪಡಿಸತೊಡಗಿತು. ಪಂಜಾಬ್ ಸಿವಿಲ್ ಸೆಕ್ರಟೇರಿಯಟ್ ಕಚೇರಿಯಿಂದ ಹೊರಬಂದ ಪೋಲೀಸ್ ಸಹಾಯಕ ಸೂಪರಿಂಟೆಂಡ್ ಜೆ.ಪಿ. ಸಾಂಡಸರ್್ ನ್ನು ಸ್ಕಾಟ್ ಎಂದು ತಪ್ಪಾಗಿ ತಿಳಿದು ಅಲ್ಲಿಯೇ ಅಡಗಿ ಕುಳಿತ್ತಿದ್ದ ಭಗತ್ ಮತ್ತು ರಾಜಗುರು ಇಬ್ಬರೂ ದೈತ್ಯರಂತೆ ಎದುರಾಳಿಯ ಮೇಲರಗಿ ಗುಂಡಿನ ಸುರಿಮಳೆಗೈದಾಗ ಹತ್ತಿರದಲ್ಲಿಯೇ ಇದ್ದ ಪೋಲೀಸರಾರು ಇವರತ್ತ ಸುಳಿಯುವ ಕೊಂಚ ಧೈರ್ಯವನ್ನು ಹೊಂದಿರಲಿಲ್ಲ. ಬ್ರ್ರಿಟೀಷ್ ಪಾಳೆಯಕ್ಕೆ ಸುದ್ದಿ ಉರಿಬೆಂಕಿಯ ಕೆನ್ನಾಲಗೆಯಂತೆ ವ್ಯಾಪಿಸತೊಡಗಿತು. ಇದರಿಂದ ಭಗತ್ಸಿಂಗ್ರು ರಾಷ್ಟ್ರಾದ್ಯಂತ ಕೋಟ್ಯಾಂತರ ಜನರ ಮನಸೂರೆಗೈದು ಅವರ ಪ್ರೀತಿಗೆ ಪಾತ್ರರಾದರು. ಇವರನ್ನು ಬಂಧಿಸಲು ಬೆಂಬಿಡದ ಬ್ರಿಟೀಷ್ ಪೋಲೀಸರು ಬೇಟೆ ನಾಯಿಗಳಂತೆ ವ್ಯಾಪಕ ಬಲೆ ಬೀಸತೊಡಗಿದರು. 1928ರ ಡಿಸೆಂಬರ್ನಲ್ಲಿ ಭಗತ್ ಲಾಹೋರ್ ಬಿಟ್ಟು ಬಂಗಾಳ ಮತ್ತು ಉತ್ತರ ಪ್ರದೇಶಗಳ ಎಲ್ಲೆಡೆ ಕ್ರಾಂತಿಕಾರಿ ಗುಂಪುಗಳೊಂದಿಗೆ ಸಂಪರ್ಕ ಕಲ್ಪಿಸುತ್ತಾ ಸಮಯದೂಡಿದರು. ಕಲ್ಕತ್ತೆಯಲ್ಲಿ ಬಾಂಬುಗಳನ್ನು ತಯಾರಿಸುವ ಪುಟ್ಟ ಪ್ರಯೋಗ ಶಾಲೆಯೊಂದನ್ನು ಸಹಚರರೊಂದಿಗೆ ಒಡಗೂಡಿ ಸ್ಥಾಪಿಸಿದರು. ತಯಾರಾದ ಬಾಂಬುಗಳ ಪರೀಕ್ಷೆ ಸಮಯದಲ್ಲಿ ಹಲವು ಬಾರಿ ಭಗತ್ ಹಾಜರಿರುತ್ತಿದ್ದರು.
ಅಸೆಂಬ್ಲಿಯಲ್ಲಿ ಬಾಂಬಿನ ದಾಳಿ:ಈ ಮಧ್ಯ ಸಾರ್ವಜನಿಕ ರಕ್ಷಣಾ ಕಾಯಿದೆ ಮತ್ತು ಕಾಮರ್ಿಕ ವಿವಾದ ಕಾಯಿದೆಗಳನ್ನು ಕೇಂದ್ರ ಶಾಸನ ಸಭೆಯು ಜಾರಿಗೆ ತರಲು ಸಿದ್ದವಾಗಿತ್ತು. ಈ ಜನ ವಿರೋಧಿ ಕಾಯಿದೆಗಳ ವಿರುದ್ದ ಪ್ರತಿರೋದ ವ್ಯಕ್ತ ಪಡಿಸಲು ಕೇಂದ್ರ ಶಾಸನ ಸಭೆಗೆ ನುಸುಳಿ ಯಾರಿಗೂ ಅಪಾಯವಾಗದಂತೆ ಬಾಂಬೆಸೆದು ದಸ್ತಗಿರಿಯಾದ ನಂತರ ಹಿಂದೂಸ್ತಾನ್ ಸಮಾಜವಾದಿ ಗಣತಂತ್ರ ಸಂಘಟನೆಯ ಧ್ಯೇಯೋದ್ದ್ಯೇಶಗಳನ್ನು ಪ್ರಚಾರ ಪಡಿಸಬೇಕೆಂದು ತೀಮರ್ಾನವಾಗಿತ್ತು. ಈಗಾಗಲೇ ಸ್ಯಾಂಡಸರ್್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ತಪ್ಪಿಸಿಕೊಂಡಿರುವುದರಿಂದ ಅಸೆಂಬ್ಲಿಯಲ್ಲಿ ಬಾಂಬು ಹಾಕಲು ಭಗತ್ರನ್ನು ಪರಿಗಣಿಸುವುದು ಬೇಡವೆಂಬತ್ತ ಚಚರ್ೆ ಸಾಗಿತ್ತು. 'ಹಿಂಸೆಯ ಕಳಂಕವನ್ನು ನಮಗೆ ಅಂಟಿಸಿರುವುದರ ಬಗ್ಗೆ ನಾವು ನರಳಿದ್ದೇವೆ. ನಾವು ಕೊಲೆಗಡುಕರೂ ಅಲ್ಲ, ಭಯೋತ್ಪಾದಕರೂ ಅಲ್ಲ. ನಮ್ಮ ರಾಷ್ಟ್ರ ಮತ್ತು ಪ್ರಪಂಚ, ಕ್ರಾಂತಿಯಲ್ಲಿರುವ ನಮ್ಮ ನಂಬಿಕೆಯನ್ನು ತಿಳಿಯಬೇಕು ಎಂಬುದೇ ನಮ್ಮ ಬಯಕೆ. ನಮ್ಮ ಸಂಘಟನೆಯ ಆಸೆ, ಆಕಾಂಕ್ಷೆ, ನಿಷ್ಟೆ ಮತ್ತು ತತ್ವ ಸಿದ್ದಾಂತಗಳನ್ನು ನ್ಯಾಯಾಲಯದ ಕಟಕಟೆಯ ಮೇಲೆ ಭಗತ್ ರಷ್ಟು ನಿಷ್ಕೃಷ್ಟವಾಗಿ ವಾದ ಮಂಡಿಸಲು ಇನ್ನಾರಿಗೂ ಸಾಧ್ಯವಿಲ್ಲವೆಂದೂ, ಭಗತ್ & ಬಿ.ಕೆ. ದತ್ ಜಂಟಿಯಾಗಿ ಕೆಲಸ ನಿರ್ವಹಿಸಬೇಕೆಂದೂ ಸುಖ್ದೇವ್ ಪಟ್ಟು ಹಿಡಿದು ಕುಳಿತದ್ದರಿಂದ ಸಭೆಯಲ್ಲಿ ಅದರಂತೆಯೇ ತೀಮರ್ಾನವಾಯಿತು. ಅವರ ವಾಕ್-ವೈಕರಿ, ಪಾಂಡಿತ್ಯ ಅಂತಹ ಮೇರು ಮುಟ್ಟಾಗಿತ್ತು, ಎತ್ತ ನಡೆದರೂ ಸದಾ ಬೇತಾಳವನ್ನೊತ್ತ ತ್ರಿವಿಕ್ರಮನಂತೆ ಜೋಳಿಗೆಯಲ್ಲಿ ಪುಸ್ತಕಗಳ ರಾಶಿಯನ್ನೇ ಕೊಂಡೊಯ್ಯುತ್ತಿದ್ದರು. ಪ್ರಗತಿಪರ ಸಾಹಿತ್ಯ ಅದರಲ್ಲೂ ಸಮಾಜವಾದಿ ಸಾಹಿತ್ಯದ ಅಧ್ಯಯನಕ್ಕಾಗಿ ಅಗಾಧ ಸಮಯ ಮೀಸಲಿಡುತ್ತಿದ್ದರು. ತುಪಾಕಿಯ ಗುಂಡಿನಂತೆ, ಫಿರಂಗಿಯಿಂದ ಎದುರಾಳಿಗಳನ್ನು ಸೀಳುತ್ತಾ ಹೊರಟ ಸಿಡಿಮದ್ದಿನಂತೆ ಅವರ ಸ್ಪೋಟಕ ಪದಗಳು ಕೇಳುಗರ ಹೃದಯವನ್ನು ಭೇಧಿಸುವ ಸಾಮಥ್ರ್ಯ ಹೊಂದಿದ್ದವು.
ಹಿಂದಿನ ದಿನವೇ ಸದನಕ್ಕೆ ಭೇಟಿ ಕೊಟ್ಟು ಕಾಯರ್ಾಚರಣೆಯ ದಿನ ತಾವು ನಿಲ್ಲಬೇಕಾದ ಆಯಕಟ್ಟಿನ ಜಾಗವನ್ನು ಇಬ್ಬರೂ ಕ್ರಾಂತಿಕಾರಿಗಳು ನೋಡಿಕೊಂಡರು. ಭಗತ್ನನ್ನು ತಾನಿನ್ನೆಂದೂ ನೋಡಲಾರೆನೇನೋ ಎಂಬ ಭಾರವಾದ ಹೃದಯದಿಂದ ಚಂದ್ರಶೇಖರ್ ಆಜಾದ್ರು ಇವರನ್ನು ಬೀಳ್ಕೊಟ್ಟರು. ಈವೆರಡೂ ಕಾಯಿದೆಗಳು ಅಂಗೀಕಾರಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲವಾದ್ದರಿಂದ ಚಚರ್ೆಯ ನಡುವೆ ಭಗತ್ & ಬಿ.ಕೆ. ದತ್ ಎದ್ದುನಿಂತು ಬಾಂಬೊಂದನ್ನು ಸಭೆಯತ್ತ ಎಸೆದರು. 'ಇಂಕ್ವಿಲಾಬ್-ಜಿಂದಾಬಾದ್', 'ಬ್ರಿಟೀಷ್ ಸಾಮ್ರಾಜ್ಯಶಾಹಿಗೆ ಧಿಕ್ಕಾರ' ಎಂಬ ಘೋಷಣೆಗಳನ್ನು ಕೂಗುತ್ತಾ ಕರಪತ್ರ ತೂರಿದರು. ಸುಲಭವಾಗಿ ತಪ್ಪಿಸಿಕೊಳ್ಳಬಹುದಾಗಿದ್ದರೂ ಅದಕ್ಕಾಗಿ ಯಾವುದೇ ಪ್ರಯತ್ನ ಮಾಡದೆ ಇಬ್ಬರೂ ಮಂಜುಗಡೆಯಂತೆ ದಸ್ತಗಿರಿಯಾಗಲು ನಿಂತಾಗ ಕೆಲವು ಸಮಯದ ನಂತರವಷ್ಟೇ ಪೋಲೀಸರು ಎಚ್ಚೆತ್ತು ಅವರನ್ನು ಬಂಧಿಸಲನುವಾದರು. ನ್ಯಾಯಾಲಯವನ್ನು ಪ್ರಚಾರ ಮಾಧ್ಯಮವನ್ನಾಗಿ ಭಗತ್ ಸಂಪೂರ್ಣವಾಗಿ ಬಳಸಿಕೊಂಡು ಕಿವುಡಾಗಿದ್ದ ಬ್ರಿಟೀಷ್ ಪ್ರಭುತ್ವ ಕಿವಿ ನಿಮಿರುವಂತೆ ಮಾಡುವದಷ್ಟೆ ಅವರ ಮತ್ತು ಸಂಘಟನೆಯ ಮುಖ್ಯ ಧ್ಯೇಯವಾಗಿತ್ತು.
ಅಸೆಂಬ್ಲಿಯಲ್ಲಿ ಬಾಂಬು ದಾಳಿಯಾದ ತಕ್ಷಣವೆ ಪ್ರಗತಿಪರ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಕಾಂಗ್ರೆಸ್ ಸದಸ್ಯ ಚಮನ್ಲಾಲ್ ಇದನ್ನು ಖಂಡಿಸಿ ಬಾಂಬ್ ಎಸೆಯುವುದು ಹುಚ್ಚುತನ ಎಂದದಕ್ಕೆ, ಮೊದಲ ಭೇಟಿಯಲ್ಲಿಯೇ ಭಗತ್ಸಿಂಗ್ರವರು ತನ್ನ ಲಾಯರಾಗಿದ್ದ ಮತ್ತೊಬ್ಬ ಕಾಂಗ್ರೆಸ್ ಸದಸ್ಯ ತರುಣ್ ಅಸಫ್ ಆಲಿಗೆ ಹೇಳಿದ್ದು: 'ನಾವು ಹುಚ್ಚರಲ್ಲ ಎಂಬುದನ್ನು ದಯಮಾಡಿ ಚಮನ್ಲಾಲ್ಗೆ ಮನದಟ್ಟು ಮಾಡಿ. ನಾವು ಸ್ಥಿತಿಗತಿಗಳ, ಆಶೋತ್ತರಗಳ ಗಂಭೀರ ವಿದ್ಯಾಥರ್ಿಗಳು ಎಂಬುದನ್ನು ವಿನಮ್ರವಾಗಿ ತಿಳಿಸುತ್ತೇವೆ'.
ಭಗತ್ಸಿಂಗ್ರು ಅಪರಾಧಕ್ಕೆ ಶಿಕ್ಷೆ ವಿಧಿಸಿದ ನಂತರ ಅವರನ್ನು ಕೆಲಕಾಲ ಮಿಯಾನ್ವಾಲಿ ಜೈಲಿನಲ್ಲಿಟ್ಟಿದ್ದು ನಂತರ ಲಾಹೋರ್ ಸೆಂಟ್ರಲ್ ಜೈಲಿಗೆ ರವಾನಿಸಲಾಯಿತು. ಸ್ಯಾಂಡರ್ಸ ಹತ್ಯೆ, ಲಾಹೋರ್ ಪಿತೂರಿ ಮೊಕದ್ದಮೆ ಹೀಗೆ ಹಲವು ಅಪರಾದಗಳ ಸರಣಿ ಪಟ್ಟಿಯನ್ನು ಅವರ ಸುತ್ತಲೂ ಬ್ರಿಟೀಷರು ಹೆಣೆಯಲಾರಂಭಿಸಿದರು. ಅಪ್ರತಿಮ ವೀರರು ಎಲ್ಲಿದ್ದರೂ ಆಸ್ಟೋಟಿಸುತ್ತಾರೆ, ಶತ್ರುಪಾಳೆಯವನ್ನು ಛಿದ್ರಗೊಳಿಸಿತ್ತಾರೆ, ಅವರನ್ನು ಪದೇ ಪದೇ ಘಾಸಿಗೊಳಿಸಿ ಧೂಳಿಪಟಮಾಡುತ್ತಾರೆ. ಅಂತೆಯೇ ರಾಜಕೀಯ ಬಂಧಿಗಳಿಗೆ ಜೈಲಿನಲ್ಲಿ ನೀಡಲಾಗುತ್ತಿದ್ದ ಕಿರುಕುಳವನ್ನು ಪ್ರತ್ಯಕ್ಷ ಕಂಡ ಭಗತ್ಸಿಂಗ್, ಉತ್ತಮ ಸೌಲಭ್ಯಗಳಿಗಾಗಿ ಉಪವಾಸ ಸತ್ಯಾಗ್ರಹ ಹೂಡಿ ಬಂಧಿಗಳಿಗೆ ಸ್ವಲ್ಪ ಮಟ್ಟಿಗೆ ಉತ್ತಮ ಆಹಾರ ಮತ್ತು ಓದಲು ಬೇಕಾದ ಸೌಲಭ್ಯ ಒದಗಿಸುವಲ್ಲಿ ಸತ್ಯಾಗ್ರಹವು ಯಶಸ್ವಿಯಾಯಿತು.
ಚಂದ್ರಶೇಖರ ಆಜಾದ್ರು ನಾಯಕತ್ವದಲ್ಲಿ ಹಿಂದೂಸ್ತಾನ್ ಸಮಾಜವಾದಿ ಗಣತಂತ್ರ ಸಂಘಟನೆಯು ಭಗತ್ರನ್ನು ಜೈಲಿನಿಂದ ಅಪಹರಿಸಿ ಬಿಡಿಸಿಕೊಂಡು ಬರಲು ಯೋಜಿಸಿದ ಯಾವ ತಂತ್ರಗಳೂ ಫಲಿಸದೆ ಕಾರ್ಯಕರ್ತರು ಕಂಗೆಟ್ಟರು.
ಜೈಲಿನಲ್ಲಿ ಬಂಧಿಯಾಗಿದ್ದ ದಿನಗಳಲ್ಲಿ ಹಲವು ಪುಸ್ತಕಗಳನ್ನು ತರುವಂತೆ ಸಹಚರರಲ್ಲಿ ದುಂಬಾಲು ಬೀಳುತ್ತಿದ್ದರು. ಅವರು ಓದಿ ಮುಗಿಸಿದ ಕೆಲವು ಅತಿ ಮುಖ್ಯ ಪುಸ್ತಕಗಳೆಂದರೆ, 'ಜನತೆ ಏಕೆ ಹೋರಾಡುತ್ತದೆ?', 'ಎರಡನೆ ಅಂತರಾಷ್ಟ್ರೀಯದ ಪತನ', 'ಎಡಪಂಥೀಯ ಸಮತಾವಾದ', 'ಫ್ರಾನ್ಸಿನಲ್ಲಿ ಅಂತಯರ್ುದ್ದ', 'ಚಾರಿತ್ರಿಕ ಭೌತವಾದದ ಸಿದ್ದಾಂತ', 'ಸೋವಿಯತ್ಗಳ ಕಾರ್ಯಚರಣೆ', 'ರೈತಾಪಿ ಜನರ ಏಳಿಗೆ ಮತ್ತು ಋಣಬಾಧೆ', ಇತ್ಯಾದಿ. ಅವರು ಚಿಂದಿ ಬಟ್ಟೆಯಲ್ಲಿದ್ದರೂ ಸಹ ಪುಸ್ತಕಗಳ ಜೋಳಿಗೆ ಅವರ ಕಂಕುಳಲ್ಲಿ ಸದಾ ಜೋತಾಡುತ್ತಿತ್ತು.
ಬಂಡೆಕಲ್ಲುಗಳನ್ನೇ ಪುಡಿಗಟ್ಟುವಷ್ಟು ತೀಕ್ಷ್ಣ ಶಕ್ತಿ ಹೊಂದಿದ್ದ ಭಗತ್ಸಿಂಗ್ ಸೆರೆಮನೆಯ ಸಂಕಷ್ಟ, ಯಾತನೆಗಳಿಂದಾಗಿ ಕೊನೆಕೊನೆಗೆ ಬಸವಳಿದು ಕೃಷವಾಗಿದ್ದ ದೇಹ ಎಂಥಹವರಲ್ಲೂ ಕಣ್ಣೀರು ಹರಿಸುವಂತಿತ್ತು. ಆದರೆ ಅವರ ಕಣ್ಣುಗಳಲ್ಲಿನ ತೇಜಸ್ಸಿನ ಪ್ರಖರತೆ ಮತ್ತಷ್ಟು ಮಗಧಷ್ಟು ಇಮ್ಮಡಿಗೊಳ್ಳುತ್ತಿತ್ತು. ಸೆರೆಮನೆಯಲ್ಲಿದ್ದಷ್ಟೂ ದಿನವೂ 'ಕಾಕೋರಿ ದಿನೋತ್ಸವ', 'ಲೆನಿನ್ ದಿನೋತ್ಸವ', ಹೀಗೆ ಮುಂತಾದ ಕ್ರಾಂತಿಕಾರಿ ಉತ್ಸವಗಳನ್ನು ಆಚರಿಸುತ್ತಾ ಖುಷಿ ಪಡುತ್ತಿದ್ದರು. ಸಂಪೂರ್ಣ ಮಾಕ್ಸರ್್ವಾದಿಗಳಾಗಿ ಪರಿವತರ್ಿತರಾಗದಿದ್ದರೂ ಮಾಕ್ಸರ್್ವಾದವನ್ನು ಇಂಚಿಂಚೂ ಅಭ್ಯಸಿಸುತ್ತಾ ವಿಷಯದಿಂದ ವಿಷಯವನ್ನು ಗ್ರಹಿಸುವ ಪ್ರಕ್ರಿಯೆಯ ಹಾದಿಯಲ್ಲಿದ್ದರು. ಅವರು ಅಧ್ಯಯನದ ಮೂಲಕ ಸಿದ್ದಾಂತವನ್ನು ಒಂದು ಅಸ್ತ್ರವಾಗಿ ವಿರೋಧಿಗಳ ಕಪಟತೆಯನ್ನು ಛಿದ್ರಗೊಳಿಸಲು ಕ್ರಿಯೆಯಾಗಿ ಬಳಸುತ್ತಿದ್ದರು.
ಲಾಹೋರ್ ಉಚ್ಚ ನ್ಯಾಯಾಲಯದಲ್ಲಿ ಭಗತ್ ಸಿಂಗ್ ನುಡಿದ ಮಾತುಗಳು ಅವರ ಪ್ರಖರ ಪಾಂಡಿತ್ಯಕ್ಕೆ ಹಿಡಿದ ಕನ್ನಡಿಯಂತಿವೆ: 'ಕ್ರಾಂತಿಯ ಖಡ್ಗವನ್ನು ವಿಚಾರದ ಸಾಣೆಕಲ್ಲಿನ ಮೇಲೆ ಹರಿತಗೊಳಿಸಲಾಗುತ್ತದೆ'. ಗಾಂಧೀಜಿಯವರ ಬಗ್ಗೆ ಅವರಿಗೆ ಗೌರವವಿದ್ದರೂ ಸೈದ್ದಾಂತಿಕ ನಿಲುಮೆಯ ಕುರಿತು ಅವರು ಈ ರೀತಿ ನುಡಿದಿದ್ದಾರೆ: 'ಗಾಂಧೀಜಿಯು ಒಬ್ಬ ಉದಾರ ಹೃದಯದ ಪರೋಪಕರಿ ಮನುಷ್ಯ. ನಮಗೆ ಅಗತ್ಯವಿರುವುದು ಪರೋಪಕಾರವಲ್ಲ, ಆದರೆ ಚಲನಾತ್ಮಕ ವೈಜ್ಞಾನಿಕ ಸಾಮಾಜಿಕ ಶಕ್ತಿ'. 1929 ರಲ್ಲಿ ಅವರನ್ನು ಬಂಧಿಸುವ ಹೊತ್ತಿಗಾಗಲೇ ಅವರು ಭಯೋತ್ಪಾದಕ ಮತ್ತು ವ್ಯಕ್ತಿಗತವಾದ ವೀರೋಚಿತ ಕಾರ್ಯಗಳಲ್ಲಿ ನಂಬಿಕೆ ಕಳೆದುಕೊಂಡು "ಕ್ರಾಂತಿಯೊಂದು ಸಮೂಹಕ್ಕಾಗಿ ಸಮೂಹ ನಡೆಸುವ ಕ್ರಿಯೆ" ಎಂಬ ದೃಢ ನಿಲುಮೆಗೆ ಬಂದಿದ್ದರು. ಇದಕ್ಕೆ ಪೂರಕವಾಗಿಯೇನೋ ಎಂಬಂತೆ ಅವರನ್ನು ಗಲ್ಲಿಗೇರಿಸುವ ಸ್ವಲ್ಪ ಮುಂಚಿತವಾಗಿ "ನಿಜವಾದ ಕ್ರಾಂತಿಕಾರಿ ಸೇನೆಯು ಹಳ್ಳಿ ಮತ್ತು ಕಾಖರ್ಾನೆಗಳಲ್ಲಿವೆ" ಎಂದಿದ್ದರು.
ಕ್ರಾಂತಿಕಾರಿಯ ಸಾವಿನ ಗಳಿಗೆಗಳು:ಭಗತ್ಸಿಂಗ್ರ ಕೊನೆಯ ದಿನಗಳಲ್ಲಿ ಸಂಘಟನೆಯ ಬಹುತೇಕ ಮಂದಿ ಸೆರೆಮನೆಯಲ್ಲಿ ನ್ಯಾಯಾಲಯದ ಕುರಿತು ಚಚರ್ಿಸುತ್ತಿದ್ದಾಗ ರಾಜಗುರು ಮತ್ತು ಭಗತ್ಸಿಂಗ್ರಿಬ್ಬರೂ ಗಲ್ಲಿಗೇರುವುದು ಖಚಿತವೆಂದು ತಿಳಿದಿದ್ದರಿಂದ ಅವರನ್ನು ಹೊರತುಪಡಿಸಿ ತಮಾಷೆಗಾಗಿ ಒಬ್ಬರ ಮೇಲೊಬ್ಬರು ಗಲ್ಲು ಶಿಕ್ಷೆ ವಿಧಿಸಿಕೊಂಡು ನಗೆಯಾಡುತ್ತಿದ್ದರು.'ರಾಜಗುರು ಮತ್ತು ನನಗೆ ಏಕೆ ಶಿಕ್ಷೆ ವಿಧಿಸಲಿಲ್ಲ? ನಮ್ಮನ್ನು ಬಿಡುಗಡೆಗೊಳಿಸುತ್ತೀರೇನು?' ಎಂದು ನಗುತ್ತಾ ಕೇಳಿದ ಭಗತ್ಸಿಂಗ್ ಮಾತುಗಳು ಅವರಲ್ಲಿ ಕಂಪನ ಸೃಷ್ಟಿಸಿದವು.ಯಾರಲ್ಲಿಯೂ ಉತ್ತರವಿಲ್ಲದೆ ನಿಶ್ಯಬ್ಧ, ನಿಲರ್ಿಪ್ತತೆ ಆವರಿಸಿದವು. ಮತ್ತಷ್ಟು ಛೇಡಿಸುವ ಧ್ವನಿಯಲ್ಲಿ 'ವಾಸ್ತವವನ್ನು ಗುರುತಿಸಲು ಭಯವೇ?' ಎಂದು ಭಗತ್ ನುಡಿದಾಗ ಇನ್ನಷ್ಟು ನಿಶ್ಯಬ್ಧ ಮನೆಮಾಡಿ ಸೂತಕದ ವಾತಾವರಣ ಉಂಟಾಯಿತು. ನಿಶ್ಯಬ್ಧ ಮತ್ತು ಮೌನವನ್ನು ತನ್ನ ನಗುವಿನಿಂದ ಭೇಧಿಸುತ್ತಾ ಹೇಳಿದ:"ನಾವು ಸಾಯೋವರೆಗೆ ಕುತ್ತಿಗೆಗೆ ಕುಣಿಕೆ ಬೀರಿ ನಮ್ಮನ್ನು ನೇತು ಹಾಕುವುದು ನಿಜ, ಕಾಮ್ರೇಡ್ಸ್. ಇದು ನನಗೂ ಗೊತ್ತು. ನಿಮಗೂ ಗೊತ್ತು. ಮತ್ತೇಕೆ ಅದರತ್ತ ಕಣ್ಣು ಮುಚ್ಚಿಕೊಳ್ಳಬೇಕು? ರಾಷ್ಟ್ರಾಭಿಮಾನಕ್ಕಾಗಿ ಸಿಗುವ ಅತ್ಯುನ್ನತ ಬಹುಮಾನ ಅದು. ಅದು ನನಗೇ ಸಿಗುತ್ತಿರುವುದರಿಂದ ನನಗೆ ಹೆಮ್ಮೆಯೇ. ನನ್ನ ಬಾಹ್ಯ ದೇಹವನ್ನು ನಾಶಗೊಳಿಸಿ ಈ ರಾಷ್ಟ್ರದಲ್ಲಿ ಅವರು ಸುರಕ್ಷಿತವಾಗಿರಬಹುದೆಂದು ಭಾವಿಸಿದ್ದಾರೆ. ಅದು ತಪ್ಪು ಕಲ್ಪನೆಯಷ್ಟೆ. ಅವರು ನನ್ನನ್ನು ಕೊಲ್ಲಬಹುದಾದರೂ, ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ. ವಿಚಾರಗಳಿಗೆ ಸಾವಿಲ್ಲ, ಸಿದ್ದಾಂತಗಳಿಗೆ ಅಳಿವಿಲ್ಲ. ಅವರು ನನ್ನ ದೇಹವನ್ನು ಪುಡಿಗಟ್ಟಹುದು. ಆದರೆ ನನ್ನ ಚೈತನ್ಯವನ್ನು ಪುಡಿಗಟ್ಟಲಾರರು. ಬ್ರಿಟೀಷರು ಈ ನೆಲದಿಂದ ಕಂಬಿ ಕೀಳುವವರೆಗೂ ನನ್ನ ವಿಚಾರಗಳು ಅವರನ್ನು ಅನಿಷ್ಟದಂತೆ ಬೆಂಬಿಡದೆ ಕಾಡುತ್ತವೆ".
"ಇದು ಒಂದೆಡೆಯ ಚಿತ್ರಣವಷ್ಟೆ. ಮತ್ತೊಂದೆಡೆಯದ್ದು ಮತ್ತಷ್ಟು ಪ್ರಕಾಶಮಾನವಾಗಿ ಹೊಳೆಯುತ್ತಿದೆ. ಬ್ರಿಟೀಷ್ ಗುಲಾಮಕೋರರಿಗೆ ಜೀವಂತ ಭಗತ್ ಸಿಂಗ್ ಗಿಂತ ಸತ್ತ ಭಗತ್ ಸಿಂಗ್ ಹೆಚ್ಚು ಅಪಾಯಕಾರಿ. ನನ್ನನ್ನು ನೇಣಿಗೇರಿಸಿದ ನಂತರ, ನನ್ನ ಕ್ರಾಂತಿಕಾರಿ ವಿಚಾರಗಳ ಸುವಾಸನೆಯು ನಮ್ಮ ಸುಂದರನಾಡಿನ ವಾತಾವರಣದಲ್ಲಿ ಪಸರಿಸುತ್ತದೆ. ಅವು ಯುವಜನರನ್ನು ಪ್ರೇರೇಪಿಸಿ ಸ್ವಾತಂತ್ರ್ಯ ಮತ್ತು ಕ್ರಾಂತಿಗಾಗಿ ಅವರನ್ನು ಹುಚ್ಚರನ್ನಾಗಿಸಿ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ವಿನಾಶದಂಚಿಗೆ ತಳ್ಳುತ್ತವೆ. ಇದು ನನ್ನ ಖಚಿತಾಭಿಪ್ರಾಯ. ರಾಷ್ಟ್ರಕ್ಕಾಗಿ ನಾನು ಸಲ್ಲಿಸಿದ ಸೇವೆ ಮತ್ತು ನನ್ನ ಜನತೆಗಾಗಿ ತೋರಿದ ಪ್ರೀತಿಗಳಿಗೆ ನೀಡುವ ಅತ್ಯುನ್ನತ ಬಹುಮಾನವನ್ನು ನಾನು ಪಡೆಯುವ ದಿನವನ್ನು ಅತಿ ಕಾತುರತೆಯಿಂದ, ಸಂಭ್ರಮ ಸಡಗರದಿಂದ ಇದಿರು ನೋಡುತ್ತಿದ್ದೇನೆ".
ಭಗತ್ಸಿಂಗ್ ರು ಜೈಲಿನಲ್ಲಿ ಕಳೆದ ಕೊನೆಯ ದಿನಗಳಂದು ಅವರ ತಾಯಿಯ ದಿಟ್ಟತನದ ನುಡಿಗಳು ನಿಜಕ್ಕೂ ಆಪ್ಯಾಯಮಾನ: "ನಿನ್ನ ನಿಲುಮೆಯನ್ನು ಎಂದಿಗೂ ಬದಲಿಸಬೇಡ. ಪ್ರಪಂಚವೇ ಮರೆಯಲಾಗದ ಸಾವು ಎಂದಿಗೂ ಅತ್ಯುತ್ತಮವಾದದ್ದು. 'ಇಂಕ್ವಿಲಾಬ್ ಜಿಂದಾಬಾದ್' ಘೋಷಣೆಯನ್ನು ಕೊನೆಯವರೆಗೂ ಕೂಗುತ್ತಿರು. ಯಾವ ತಾಯಿಗೂ ಲಭಿಸದ ಹೆಮ್ಮೆ ನನಗುಂಟಾಗಿದೆ".
ಜೈಲಿನ ವಾರ್ಡನ್ ಚರತ್ ರವರು ಭಗತ್ಸಿಂಗ್ ಓದಲು ಬಯಸಿದ ಎಲ್ಲ ಪುಸ್ತಕಗಳನ್ನೂ ಜೈಲಿನ ಸೆಲ್ಲಿನೊಳಕ್ಕೆ ಕದ್ದು ತಂದುಕೊಡುತ್ತಿದ್ದರೂ ಭಗತ್ ಸಿಂಗ್ ಓದುವ ವೇಗಕ್ಕೆ ತಕ್ಕಂತೆ ಪುಸ್ತಕಗಳನ್ನೂ ಪೂರೈಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಸಾವಿನ ಕರೆಗಂಟೆಯಂತೆ ಸೈನಿಕನೊಬ್ಬ ನೇಣುಗಂಬಕ್ಕೆ ಎಳೆದೊಯ್ಯಲು ಬಂದಾಗಲೂ ಲೆನಿನ್ ಕುರಿತ ಪುಸ್ತಕವನ್ನೋದುತ್ತಿದ್ದ ಭಗತ್ಸಿಂಗ್ರು ಸ್ವಲ್ಪವೂ ವಿಚಲಿತರಾಗದೆ ಪುಸ್ತಕ 'ಮುಗಿಸಿದ ನಂತರ ಬಂದರಾಗುತ್ತದಲ್ಲವೇನು?' ಎಂದು ಸೈನಿಕನಿಗೆ ಗಂಭೀರವಾಗಿಯೇ ಕೇಳಿದುದು ನಿಜಕ್ಕೂ ಮೈನವಿರೇಳಿಸುತ್ತದೆ. ಗಲ್ಲಿಗೇರಿಸುವ ದಿನ ಸಹ ಎದೆಗುಂದದೆ ಖುಷಿಯಿಂದಿದ್ದರು. ಗಲ್ಲು ಸ್ಥಳದ ಪ್ಲಾಟ್ಫಾರಂ ಮೇಲೆ ನಿಂತು ಹಗ್ಗಕ್ಕೆ ಮುತ್ತಿಕ್ಕುತ್ತಾ "ಇಂಕ್ವಿಲಾಬ್ ಜಿಂದಾಬಾದ್" ಘೋಷಣೆ ಮಾಡುತ್ತಾ ಸುಖ್ದೇವ್, ಭಗತ್ ಮತ್ತು ರಾಜಗುರು ಕುಣಿಕೆ ಬೀರಿಕೊಂಡರು. ಅಂದು ಸೆರೆಮನೆಯಲ್ಲಿ ಶ್ಮಶಾನಮೌನ ಆವರಿಸಿ, ಯಾರೊಬ್ಬರೂ ಆಹಾರ ಮುಟ್ಟಲಿಲ್ಲ. ಅವರನ್ನು ಗಲ್ಲಿಗೇರಿಸಿದ ವಿಷಯ ತಿಳಿಯದ ಅವರ ಸಂಬಂಧಿಕರು ಸಂಧಿಸಲು ಬಂದಾಗ ಗದ್ಗದಿತರಾದರು. ಸಟ್ಲೆಜ್ ನದಿತೀರದಲ್ಲಿ ಕ್ರಾಂತಿಕಾರಿಗಳ ದೇಹವನ್ನು ರಹಸ್ಯವಾಗಿ ಸುಡುತ್ತಿರುವ ವಿಷಯ ತಿಳಿದು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸತೊಡಗಿದರು. ಅಲ್ಲಿ ದೊರೆತದ್ದು ಅರೆಬರೆ ಸುಟ್ಟ ಕ್ರಾಂತಿಕಾರಿಗಳ ದೇಹದ ಬೂದಿಯಷ್ಟೆ.
ಬ್ರಿಟಿಷರು ಭಗತ್ರನ್ನು ಕೊಂದದ್ದು ಅವರ ಸಾಮ್ರಾಜ್ಯಶಾಹಿ ಭೂಪಟಕ್ಕೆ ತಾವೇ ಚೂರಿಯಿಂದ ತಿವಿದುಕೊಂಡಂತಾಯಿತಷ್ಟೆ. ಭಗತ್ರನ್ನು ರಕ್ಷಿಸಲು ಗಾಂಧೀಜಿ ನಡೆಸಿದ ಪ್ರಯತ್ನಗಳನ್ನು ಪ್ರಶ್ನಿಸಿ ದೇಶದಾದ್ಯಂತ ಯುವಕರ ಪಡೆಯು ಅವರು ಸಿಕ್ಕಲ್ಲೆಲ್ಲ ಧಮಕಿ ಹಾಕತೊಡಗಿತು. ಅಂಥಹದೊಂದು ಸಂದರ್ಭದಲ್ಲಿ ಅವರು ನೀಡಿದ ಉತ್ತರ ಎಂಥಹವರಲ್ಲೂ ವೇದನೆ ಮೂಡಿಸದಿರದು: "ಭಗತ್ಸಿಂಗ್ರನ್ನು ರಕ್ಷಿಸಲು ನನಗಿಚ್ಚೆಯಿರಲಿಲ್ಲವೆಂಬುದು ಸತ್ಯಕ್ಕೆ ದೂರವಾದದ್ದು. ಆದರೆ ನೀವು ಭಗತ್ಸಿಂಗ್ ಎಸಗಿರುವ ತಪ್ಪನ್ನೂ ಅರ್ಥಮಾಡಿಕೊಳ್ಳಬೇಕು". ಆದರೆ ಹಿಂಸೆಯ ಕುರಿತೂ ಬೇಸತ್ತಿದ್ದ ಭಗತ್ಗೆ ಗಾಂಧಿಯ 'ಬೇಜವಾಬ್ದಾರಿ ಯುವಕರು' ಎಂಬ ವರ್ಣನೆ ಕಿರಿಕಿರಿ ಉಂಟು ಮಾಡಿತ್ತು. ಸ್ವಾತಂತ್ರ್ಯವನ್ನು ಬ್ರಿಟಿಷರಿಂದ ಕಿತ್ತುಕೊಳ್ಳಬೇಕೇ ಹೊರತು ಅದೇನೂ ಆಕಾಶದಿಂದ ಬೀಳುವುದಿಲ್ಲ ಅಥವಾ ಚಳುವಳಿಗಳನ್ನು ಹಿಂತೆಗೆದುಕೊಂಡು ಶಾಂತಿಯ ಹೋಮ ಮಾಡಿದರೆ ಬರುವುದಲ್ಲವೆಂದು ಭಗತ್ ರಿಗೆ ತಿಳಿದಿತ್ತು.
ಕ್ರಾಂತಿಕಾರಿಗಳೆಂದರೆ ಕ್ರೌರ್ಯ, ಬೀಭತ್ಸತೆಗಳ ಮುಖವಾಡ ಹೊದ್ದವರೆಂದು ಭಾವಿಸುವವರು ಭಗತ್ರ ತೇಜಸ್ಸು ತುಂಬಿದ ಮುಖವನ್ನು ನೋಡಿದಲ್ಲಿ ಅವನೊಬ್ಬ ಅಸಾಧಾರಣ ಅದ್ಭುತವೇ ಸರಿಯೆನಿಸುತ್ತದೆ. ಭಗತ್ರು ಯಾವುದೇ ಕ್ಷಣದಲ್ಲೂ ಸಹ ಸಾಧಕನ ಮೂತರ್ಿವೆತ್ತ ಪ್ರತಿಮೆಯಂತಿದ್ದರು. ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಕೊನೆಗಾಣಿಸುವುದೇ ಅಂತಿಮ ಧ್ಯೇಯವೆನ್ನುವ ಅವರ ಮಾತುಗಳು, ಅವರಲ್ಲಿಯ ಮಾನವತೆಯು ಹೆಬ್ಬಂಡೆಯೊಳಗೆ ಅರಳಿ ನಿಂತಿರುವ ಹೂವುಗಳಂತೆ ಸದಾ ರಾರಾಜಿಸುತ್ತಿತ್ತು. ಸದಾ ಕತ್ತಿಯ ಅಲುಗಿನ ಮೇಲೆಯೇ ನಡೆಯುತ್ತಿದ್ದ ಯುವಜನರ ಆಸ್ಫೋಟಕ ಧ್ವನಿ ಇನ್ನಿಲ್ಲದಂತಾದರೂ ಅಂಥಹ ಸಾವಿರಾರು ಪ್ರತಿಧ್ವನಿಗೆ ಕಾರಣವಾಗುವಲ್ಲಿ ಯಶಸ್ವಿಯಾದರು. ಅವರ ಸಾವು ಸ್ವಾತಂತ್ರ್ಯದ ಕಿಡಿಯನ್ನು ದೇಶಾದ್ಯಂತ ಮತ್ತಷ್ಟು ವ್ಯಾಪಿಸಿ ಯುವಜನರಲ್ಲಿ ವಿದ್ಯುತ್ ಸಂಚಲನ ಉಂಟುಮಾಡಿತು.
ಭಗತ್ ಸಿಂಗ್ರ ಭವಿಷ್ಯವಾಣಿ ಸುಳ್ಳಾಗಲಿಲ್ಲ. ಅವರ ಹೆಸರು ಸಾವಿಗಳುಕದ ಧೈರ್ಯ, ತ್ಯಾಗ ಬಲಿದಾನ, ರಾಷ್ಟ್ರಾಭಿಮಾನ ಮತ್ತು ತದೇಕಚಿತ್ತತೆಯ ಹೋರಾಟಗಳ ಪ್ರತೀಕವಾಯಿತು. ಅವರ 'ಇಂಕ್ವಿಲಾಬ್ ಜಿಂದಾಬಾದ್ (ಕ್ರಾಂತಿ ಚಿರಾಯುವಾಗಲಿ)' ಘೋಷಣೆಯು ಇಡೀ ರಾಷ್ಟ್ರದ ಯುದ್ದದ ಕೂಗಾಗಿ ಮಾರ್ಪಟ್ಟು ಸಮಾಜವಾದಿ ಸಮಾಜ ನಿಮರ್ಾಣದ ಕನಸನ್ನು ವಿದ್ಯಾವಂತ ಯುವಜನರಲ್ಲಿ ಹಿಡಿದಿಟ್ಟಿತು. 1930 - 32 ರಲ್ಲಿ ಎಲ್ಲ ಜನರು ಒಂದೇ ಮನುಷ್ಯನಂತೆ ನಿಂತರು. ಸೆರೆಮನೆವಾಸಗಳು, ಛಡಿಯೇಟುಗಳು, ಮತ್ತು ಲಾಠಿಯೇಟುಗಳು ಅವರ ಸ್ಫೂತರ್ಿಯನ್ನು ಕಂಗೆಡಿಸಲು ಸಾಧ್ಯವಾಗಲಿಲ್ಲ. 1945 - 46 ರಲ್ಲಿ ನವಭಾರತ ಉದಯಿಸಿದ್ದನ್ನು ಇಡೀ ಪ್ರಪಂಚವೇ ಕಣ್ಣಾರೆ ಕಂಡಿತು. ಕಾಮರ್ಿಕರು, ರೈತರು, ವಿದ್ಯಾಥರ್ಿಗಳು, ಯುವಜನರು, ಜಲಸೇನೆ, ಭೂಸೇನೆ, ವಾಯುಸೇನೆ, ಮತ್ತು ಪೊಲೀಸರು ಸಹ ಬಲವಾದ ಹೊಡೆತಗಳನ್ನನುಭವಿಸಿದರು. 1930 ರವರೆಗೆ ಕೆಲವೇ ಕೆಲವರಲ್ಲಿದ್ದ ತ್ಯಾಗ, ಬಲಿದಾನ ಮತ್ತು ಅರ್ಪಣಾ ಮನೋಭಾವನೆಗಳು ಸಮೂಹ ಪ್ರಕ್ರಿಯೆಯಾಗಿ ರಾಷ್ಟ್ರಾದ್ಯಂತ ದಂಗೆಯು ವ್ಯಾಪಿಸಿತು.
ಭಗತ್ಸಿಂಗ್ ರವರಿಗೆ ಸ್ವಾತಂತ್ರ್ಯ ಸಿಗುವ ಕುರಿತು ಯಾವುದೇ ಅನುಮಾನವಿರಲಿಲ್ಲವಾದರೂ ಅವರು ಆತಂಕಗೊಂಡಿದದ್ದು ಬಿಳಿ ಸಾಹೇಬರು ಖಾಲಿ ಮಾಡಿದ ಆಸನದಲ್ಲಿ ಕಂದು ಸಾಹೇಬರು ಕುಳಿತುಕೊಳ್ಳುವರೆಂಬ ಭಯದಿಂದ. 'ಕೇವಲ ಯಜಮಾನರ ಬದಲಾವಣೆಯಿಂದ ಸ್ವಾತಂತ್ರ್ಯ ಬಂದಂತಾಗುವುದಿಲ್ಲ. ಪುರಾತನ ವ್ಯವಸ್ಥೆಯನ್ನು ನಾಶಮಾಡದೆ ಹೊಸ ಬದಲಾವಣೆಯನ್ನು ತರುವುದು ಸಾಧ್ಯವಿಲ್ಲ' ಎಂದು ಭಗತ್ಸಿಂಗ್ ರವರಿಗೆ ಮನವರಿಕೆಯಾಗಿತ್ತು. ಆದರೆ ಪ್ರತಿಭಟನೆಯ ದಿವ್ಯ ಜ್ಯೋತಿ ಆರದಂತೆ ಉರಿಯಲು ತನ್ನಂಥವರು ಸಾಯಲೇಬೇಕೆಂದು ಭಗತ್ ನಂಬಿದ್ದ.
ಸಾಯುವ ಕೆಲವೇ ನಿಮಿಷಗಳ ಮೊದಲು ಪ್ರಾರ್ಥನೆಯಂತೆ ಭಗತ್ ನುಡಿದ ಮಾತುಗಳು ಎಂಥವರನ್ನೂ ಕೆಚ್ಚೆದೆಯ ಉತ್ತುಂಗಕ್ಕೇರಿಸಬಲ್ಲವು. 'ಮೊದಲು ನಿಮ್ಮ ವೈಯುಕ್ತಿಕತೆಯನ್ನು ನುಚ್ಚುನೂರು ಮಾಡಿ, ವೈಯುಕ್ತಿಕ ಸುಖದ ಕನಸನ್ನು ಭಗ್ನಗೊಳಿಸಿ, ನಂತರ ಕೆಲಸ ಮಾಡಲು ತೊಡಗಿ. ನೀವು ಒಂದೊಂದೇ ಅಂಗುಲ ಮುಂದಕ್ಕೆ ಸಾಗಬೇಕು. ಅದಕ್ಕೆ ಧೈರ್ಯ ಬೇಕು; ದೃಡ ನಿಧರ್ಾರ ಬೇಕು; ನಿರಂತರ ಪರಿಶ್ರಮ ಬೇಕು. ಯಾವ ಕಷ್ಟ ಕಾರ್ಪಣ್ಯಗಳೂ ನಿರಾಶೆಗೊಳಿಸುವುದಿಲ್ಲ. ಯಾವ ವೈಫಲ್ಯಗಳೂ, ನಿಮ್ಮನ್ನು ಕಂಗೆಡಿಸುವುದಿಲ್ಲ. ತ್ಯಾಗ ಮತ್ತು ನರಳಾಟಗಳ ಅಗ್ನಿದಿವ್ಯವನ್ನು ಹಾದು ನೀವು ವಿಜಯಶಾಲಿಗಳಾಗುತ್ತೀರಿ. ಈ ವೈಯುಕ್ತಿಕ ಗೆಲುವುಗಳು ಕ್ರಾಂತಿಯ ಬಹುದೊಡ್ಡ ಆಸ್ತಿ....'
ಆಕರ ಗ್ರಂಥಗಳು:ಭಗತ್ ಸಿಂಗ್ - ಡಾ: ಜಿ. ರಾಮಕೃಷ್ಣ, ನವಕನರ್ಾಟಕ ಪ್ರಕಾಶನ, ಬೆಂಗಳೂರು.ವಿ ಫಾಟ್ ಟುಗೆದರ್ ಫಾರ್ ಫ್ರೀಡಮ್ - ಸಂಪಾದಕರು: ರವಿ ದಯಾಳ್, ಆಕ್ಸ್ಫಡರ್್ ಇಂಡಿಯಾ ಪೇಪರ್ ಬ್ಯಾಕ್ಸ್.ದಿ ರೆವಲ್ಯೂಷನರಿ ಮೂವ್ಮೆಂಟ್ - ಶಿವ ವಮರ್ಾ.ಹುತಾತ್ಮ ಭಗತ್ಸಿಂಗ್ - ಕುಲದೀಪ ನಯ್ಯರ್, ಕನ್ನಡ ಅನುವಾದ: ಜಿ.ಪಿ ಬಸವರಾಜು, ಲೋಹಿಯಾ ಪ್ರಕಾಶನ, ಬಳ್ಳಾರಿ.

Wednesday, June 6, 2007

Quote from Feuerbach

My only wish is. . . to transform friends of God into friends of man, believers into thinkers, devotees of prayer into devotees of work, candidates for the hereafter into students of the world, Christians who, by their own procession and admission, are "half animal, half angel" into persons, into whole persons.
-Ludwig Feuerbach (Lectures on the Essence of Religion)